ಬೆರಳ ಕೇಳಿದರೆ ಕೈಯ ಕೊಡುವವನು

ಬೆರಳ ಕೇಳಿದರೆ ಕೈಯ ಕೊಡುವವನು
ಕೈಯ ಕೇಳಿದರೆ ಕೊರಳನೆ ಕೊಡುವವನು
ನಮ್ಮ ಏಕಲವ್ಯ
ಕೊರಳ ಕೇಳಿದರೆ ಒಡಲನ ಕೊಡನೆ
ತನ್ನ ಪ್ರಾಣವ ತೆರನೆ
ಹೇ ಗುರು ದ್ರೋಣ

ಆ ಶಿಷ್ಯನಿರುವಂಥ ಗುರುಗಳೆ ಗುರುಗಳು
ಆ ಕತೆಯಿರುವಂಥ ಭಾರತವೆ ಭಾರತ
ಆವತ್ತಿಗಾ ಕತೆ ಈವತ್ತಿಗೇನೋ
ಹೇ ಗುರು ದ್ರೋಣ

ಕಾಲ ಬದಲಾಗುವುದು ಕತೆ ಬದಲಾಗುವುದು
ಗುರು ಬದಲಾಗುವರು ಶಿಷ್ಯರು ಬದಲಾಗುವರು
ಗುರುಭಕ್ತಿಯೆನ್ನುವುದು ನಗೆಪಾಟಲಾಗುವುದು
ಏಕಲವ್ಯ ಬರೆ ಭಿಲ್ಲನಾಗುವನು
ಹೇ ಗುರು ದ್ರೋಣ

ಭಿಲ್ಲನೇ ಅವನು ಭಿಲ್ಲನೆನ್ನುವುದು ಸರಿ
ಬಿಲ್ಲುವಿದ್ಯೆಯಲಿ ಪರಿಣತನು ಅಹುದು
ಅವನಿಗೇತಕೆ ಒಂದು ಮೂರುತಿಯ ಭಯಭಕುತಿ
ಅದು ಎಂಥ ಗುರುವೊ ಅದು ಎಂಥ ಋಣವೊ
ಹೇ ಗುರು ದ್ರೋಣ

ಕತೆ ಯಾಕಿಲ್ಲಿ ತಡೆಯುತ ಹೋಯಿತೊ
ಸಾಮ್ರಾಜ್ಯಗಳ ತಲೆ ಮುಗಿಯಿಸಿತೊ
ಕಲಿಸಿದ ಗುರು ಕಲ್ಪಿಸಿದ ಗುರು ಮನದೊಳು ಸಂಕಲ್ಪಿಸಿದ ಗುರು
ಕನಸಲಿ ಕಾಣಿಸಿದ ಗುರು
ಎಲ್ಲ ಗುರುಗಳು ಜಗದಾದಿ ಗುರುವೆಂದು
ಶರಣಾಯಿತೊ
ಹೇ ಗುರು ದ್ರೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೩
Next post `ನಾನು’ ಹೋದರೆ…

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys